ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಸಂಶೋಧನಾ ಪ್ರಬಂಧದ ವಿಷಯಗಳು

ಈ ಕೆಳಗಿನ ವಿಷಯಗಳನ್ನಾಧರಿಸಿ ಸಂಶೋಧಕರಿಂದ, ಯೋಜಕರಿಂದ, ಅಭಿವೃದ್ಧಿ ವ್ಯವಸ್ಥಾಪಕರಿಂದ, ಅರ್ಥಶಾಸ್ತ್ರಜ್ಞರಿಂದ, ಬುದ್ಧಿಜೀವಿಗಳಿಂದ, ಶಾಲಾ (8-10ನೇ ತರಗತಿ) -ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಕೆರೆ ಸಮ್ಮೇಳನ 2014ರಲ್ಲಿ ಮಂಡಿಸಲು ಸಂಶೋಧನಾ ಪ್ರಬಂಧ/ಭಿತ್ತಿ ಪತ್ರದ ವಿಷಯಗಳು:

  1. ಜೀವ-ವೈವಿಧ್ಯತೆ: ಪಶ್ಚಿಮ ಘಟ್ಟ, ನದಿಗಳು ಮತ್ತು ಕೆರೆಗಳು
  2. ಜೌಗು ಭೂಮಿ ಮತ್ತು ಜಡ್ಡಿ ಪ್ರದೇಶ: ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆ
  3. ಪಶ್ಚಿಮ ಘಟ್ಟ ಪ್ರದೇಶದ ಭೂ-ಕವಚ ಮತ್ತು ಭೂ-ಬಳಕೆಯಲ್ಲಿನ ಬದಲಾವಣೆ
  4. ಹವಾಮಾನ ಬದಲಾವಣೆ ಹಾಗೂ ಪಶ್ಚಿಮ ಘಟ್ಟ
  5. ಪಶ್ಚಿಮ ಘಟ್ಟ ಪ್ರದೇಶದ ಧಾರಣ ಸಾಮರ್ಥ್ಯ
  6. ಪಶ್ಚಿಮ ಘಟ್ಟ ಪ್ರದೇಶದ ನದಿ ಬಯಲುಗಳ/ತಪ್ಪಲಿನ ಧಾರಣ ಸಾಮರ್ಥ್ಯ
  7. ಪ್ರಾಕೃತಿಕ ಸರಕು ಮತ್ತು ಸೇವೆಗಳ ಮೌಲ್ಯಮಾಪನ
  8. ದೇವರ ಕಾಡು (ಕಾನು, ಪವಿತ್ರ ವನ) ಮತ್ತು ಮಿರಿಸ್ಟಿಕ ಜೌಗು
  9. ಪಶ್ಚಿಮ ಘಟ್ಟ ಪ್ರದೇಶದಲ್ಲಿ "ಪರಿಸರ ಪ್ರವಾಸೋದ್ಯಮ" ಮತ್ತು ಇಂಗಾಲದ ಮಾಪನ
  10. ಭಾರತದಲ್ಲಿ ಆಹಾರ ಮತ್ತು ಜಲ ಮೂಲಗಳ ಸಂರಕ್ಷಣೆಯ ಅಗತ್ಯತೆಗಳು
  11. ಜೌಗು ಭೂಮಿ ಸಂರಕ್ಷಣೆಗೆ ಭೂ-ಸಂವೇದಿ ಮಾಹಿತಿಯ ಉಪಯೋಗಗಳು
  12. ನೈಸರ್ಗಿಕ ಮತ್ತು ಮಾನವನಿಂದಾದ ಹಾನಿಗಳು
  13. ಸಿಹಿ ನೀರಿನ ಅಧ್ಯಯನ, ಜಲ ಪರಿಸರದ ಅಧ್ಯಯನ, ಜೀವ-ವೈವೀಧ್ಯತೆ ಹಾಗೂ ಜೈವಿಕ ಮೇಲ್ವಿಚಾರಣೆಯ ದೂರದೃಷ್ಟಿ
  14. ಪರಿಸರ ಮಾಲಿನ್ಯ - ಭೂ ಮತ್ತು ಜಲ ಪರಿಸರ - ಮೇಲ್ವಿಚಾರಣೆ, ನಿರ್ವಹಣೆ ಹಾಗೂ ಜೈವಿಕ ಪರಿಹಾರಗಳು
  15. ಸುಸ್ಥಿರ ವ್ಯವಸಾಯ ಮತ್ತು ಸಾವಯವ ಕೃಷಿ
  16. ಸಮುದ್ರ ತೀರದ ಪರಿಸರ ವ್ಯವಸ್ಥೆ - ಜೀವ-ವೈವಿಧ್ಯತೆ, ಪರಿಸರ ಉತ್ಪಾದಕತೆ ಮತ್ತು ಜೀವನೋಪಾಯದ ವಿಷಯಗಳು
  17. ಜೌಗು ಭೂಮಿ ಸಂಪನ್ಮೂಲಗಳು ಮತ್ತು ಜೀವನೋಪಾಯ
  18. ನವೀಕರಿಸಬಹುದಾದ ಇಂಧನಗಳ ಮಹತ್ವ (ಸೌರಶಕ್ತಿ, ಜೈವಿಕ ಇಂಧನ ಮತ್ತು ಜೈವಿಕ ಶಕ್ತಿ) ಮತ್ತು ಶಕ್ತಿಯ ಮಿತ ಬಳಕೆ
  19. ಪರಿಸರ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ
  20. ಪರಿಸರ ನೈತಿಕತೆ ಮತ್ತು ಹಸಿರು ತಂತ್ರಜ್ಞಾನ

ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಭಾಗದಲ್ಲಿ 3 ಬಹುಮಾನಗಳಿರುತ್ತವೆ. ಮಾಧ್ಯಮಿಕ (8, 9, 10); ಕಾಲೇಜ್ (11, 12) ಮತ್ತು ಶಿಕ್ಷಕರು (ಮಾಧ್ಯಮಿಕ ಹಾಗೂ ಕಾಲೇಜ್). ಉತ್ತಮ ಸಂಶೋಧನಾ ಪ್ರಬಂಧಕ್ಕೆ ನೀಡುವ ಈ ಬಹುಮಾನವು ಪ್ರಮಾಣ ಪತ್ರ ಮತ್ತು ಪಾರಿತೋಷಕವನ್ನು ಒಳಗೊಂಡಿರುತ್ತದೆ. ಇದೇ ರೀತಿ ಭಿತ್ತಿ ಪತ್ರಕ್ಕೂ ಸಹ ಬಹುಮಾನವಿರುತ್ತದೆ.