ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಕೆರೆ ಸಮ್ಮೇಳನ 2014 – ಉದ್ದೇಶಗಳು

ಕೆರೆ ಸಮ್ಮೇಳನ 2014ರ ಉದ್ದೇಶಗಳು ಈ ರೀತಿಯಾಗಿವೆ:

  1. ಪಶ್ಚಿಮ ಘಟ್ಟ ಪ್ರದೇಶದ ಜೌಗು ಭೂಮಿ, ಕೆರೆ, ಜಡ್ಡಿ, ಝರಿ, ಕೊಳ, ಸರೋವರ ಮತ್ತು ನದಿಗಳ ಪ್ರಸಕ್ತ ಸ್ಥಿತಿಯ ಅಧ್ಯಯನ ಹಾಗೂ ಸಂರಕ್ಷಣಾ ಕ್ರಮಗಳ ಬಗ್ಗೆ ಚಿಂತನೆ
  2. ವಿಜ್ಞಾನಿಗಳಿಂದ, ವ್ರತ್ತಿಪರರಿಂದ ಹಾಗೂ ವಿದ್ಯಾರ್ಥಿಗಳಿಂದ ಜೀವ-ವೈವಿಧ್ಯತೆ, ಪರಿಸರ ಹಾನಿ ಮತ್ತು ಸಂರಕ್ಷಣಾ ಕ್ರಮಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಸಂಶೋಧನಾ ಫಲಿತಾಂಶಗಳ ಮೇಲೆ ಉಪನ್ಯಾಸ

  3. ಜೌಗು ಭೂಮಿ ಪುನರುಜ್ಜೀವನ, ನಿರ್ವಹಣೆ ಸಂರಕ್ಷಣಾ ಕ್ರಮಗಳ ಬಗ್ಗೆ ಪ್ರಸಕ್ತ ಸಮ್ಮೇಳನದಲ್ಲಿ ಚರ್ಚಿಸುವುದು.

  4. ಇದರಲ್ಲಿ ಧಾರ್ಮಿಕ, ಸರಕಾರೇತರ ಮತ್ತು ಶೈಕ್ಷಣಿಕ ಸಂಸ್ಥೆಗಳ ಪಾತ್ರ

  5. ಜನರ ಜೀವನಾಧಾರ ಮತ್ತು ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಸಂಪನ್ಮೂಲಗಳ ಉಪಯೋಗವನ್ನು ವೈಜ್ಞಾನಿಕವಾಗಿ ನಿರ್ಧರಿಸುವುದರ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ

  6. ವಿದ್ಯಾರ್ಥಿಗಳಿಂದ ಜೌಗು ಭೂಮಿ, ಜೀವ-ವೈವಿಧ್ಯತೆ, ಪರಿಸರ ಹಾನಿ ಮತ್ತು ಸಂರಕ್ಷಣಾ ಕ್ರಮಗಳು, ಪ್ರಚಲಿತ ವಿದ್ಯಮಾನಗಳ ಕುರಿತು ದಾಖಲಿಸಿದ ಮಾಹಿತಿಗಳು ಹಾಗೂ ಸಂಶೋಧನಾ ಫಲಿತಾಂಶಗಳ ಮೇಲೆ ಉಪನ್ಯಾಸ

  7. ದುರ್ಬಲ ಪರಿಸರದ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯವಾದ ಮಾನವ ಮತ್ತು ಹಣಕಾಸಿನ ಸಂಪನ್ಮೂಲಗಳ ಹಂಚಿಕೆ.

  8. ಜೌಗು ಭೂಮಿ ಜೀವ-ವೈವಿಧ್ಯತೆಯ ಪುನರುಜ್ಜೀವನ, ನಿರ್ವಹಣೆ ಹಾಗೂ ಸಂರಕ್ಷಣೆಗೆ ವಿದ್ಯಾರ್ಥಿಗಳಿಂದ ಮತ್ತು ಸರಕಾರೇತರ ಸಂಸ್ಥೆಗಳಿಂದ ಕ್ರೀಯಾ ಯೋಜನೆಯ ಪ್ರಸ್ತಾಪ.

  9. ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಪರಿಸರ ಸಂರಕ್ಷಣೆ ಮತ್ತು ನಿರ್ವಹಣೆಯ ಸಂಶೋಧನಾ ಅಗತ್ಯತೆಗಳನ್ನು ರೂಪಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ.